ವಸ್ತು/Subject

ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು, ಶಿವಪುರಾಣ ಮೊದಲಾದವುಗಳಿಂದ ಆಯ್ದ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಉದಾತ್ತ ಅಂಶಗಳತ್ತ ಬೆಳಕು ಚೆಲ್ಲುವ ಹಲವು ಅಪರೂಪದ ಕಥೆಗಳು ಇಲ್ಲಿವೆ. ವಿಜಯ ಕರ್ನಾಟಕ ಪತ್ರಿಕೆಯ ‘ಬೋಧಿವೃಕ್ಷ’ ದಲ್ಲಿ ಈ ಕಥೆಗಳು ಕೆಲಕಾಲ ‘ಸ್ವಾರಸ್ಯ ಕಥೆಗಳು’ ಎಂಬ ಹೆಸರಿನ ಅಂಕಣವಾಗಿ ಪ್ರಕಟಗೊಳ್ಳುತ್ತಿತ್ತು. ನಂತರ ವಿಜಯವಾಣಿ ಪತ್ರಿಕೆಯಲ್ಲಿಯೂ ಕೆಲವು ಕಥೆಗಳು ಪ್ರಕಟವಾಗಿವೆ. ಪುರಾಣಗಳಿಂದ ಕಥೆಗಳನ್ನು ಆಯ್ದುಕೊಂಡು ಲೇಖಕಿ ಇಲ್ಲಿ ಮರುನಿರೂಪಣೆ ಮಾಡಿದ್ದಾರೆ. ಕೆಲವು ಕಡೆ ಕಥೆಯ ಸ್ವಾರಸ್ಯಕ್ಕಾಗಿ, ಅವರು ತಮ್ಮ ಕಲ್ಪನೆಯನ್ನೂ ಪೂರಕ, ಪೋಷಕವಾಗಿ ಸೇರಿಸಿದ್ದಾರೆ.